Thursday, July 29, 2010

ಸಾಗರೋತ್ತರದ್ಲಲಿ ‘ರಂಗ ಪಯಣ’

ಆರು ಪೆಟ್ಟಿಗೆ, ನಾಲ್ಕು ಪಾತ್ರದಾರಿಗಳು, ೬೦ ದಿನಗಳ ಮೂರು ಸಾವಿರ ಮೈಲುಗಳ ಅಮೆರಿಕ ಪ್ರವಾಸ, ಹದಿಮೂರು ರಾಜ್ಯಗಳ್ಲಲಿ ೧೫ ನಗರಗಳ ಹದಿನಾರು ಸ್ಥಳಗಳ್ಲಲಿ ವಾರಾಂತ್ಯದ ಎಂಟು ದಿನಗಳ್ಲಲಿ, ಎರಡು ನಾಟಕಗಳ ಹದಿನೈದು ಪ್ರದರ್ಶನ.... ಅಬ್ಬಾ ! ಅದೊಂದು ರೋಚಕ ಅನುಭವ.....


ಕಬ್ಬನ್ ಪಾರ್ಕ್ ಸೆಂಚುರಿ ಕ್ಲಬ್‌ನ ಅಂಗಳದ್ಲಲಿ ಗೋಬಿಮಂಚುರಿ ಮ್ಲೆಲುತ್ತಾ ಸಾಗರೋತ್ತರ ‘ರಂಗ ಪಯಣ’ದ ಅನುಭವವನ್ನು ರಂಗಭೂಮಿ ಕಲಾವಿದರಾದ ಲಕ್ಷ್ಮಿ ಚಂದ್ರಶೇಖರ್, ಸುಂದರ್‌ರಾಜ್, ಗಜಾನನ ನಾಯಕ್, ರಾಮಕೃಷ್ಣ ಕನ್ನರ್ಪಾಡಿ ವಿವರಿಸಿದ ಪರಿಯಿದು.

ಅಮೆರಿಕದ ಕನ್ನಡ ಸಂಘಗಳ ಆಹ್ವಾನದ ಮೇರೆಗೆ ಈ ನಾಲ್ಕು ಕಲಾವಿದರ ‘ಕ್ರಿಯೇಟಿವ್’ ರಂಗ ತಂಡ ಕಳೆದ ಮಾರ್ಚ್ ೨೬ರಿಂದ ಮೇ ೧೬ರವರೆಗೆ ವಿದೇಶಿ ರಂಗ ಅಭಿಯಾನ ಕೈಗೊಂಡಿತ್ತು. ಆ ಸುದೀರ್ಘ ಅನುಭವದ ಮೂಟೆಯನ್ನು ಪತ್ರಕರ್ತರ ಎದುರು ಬಿಚ್ಚಿಟ್ಟರು.

‘ಕನ್ನಡದ ರಂಗಭೂಮಿಯನ್ನು ಅನಿವಾಸಿ ಕನ್ನಡಿಗರಿಗೆ ಪರಿಚಯಿಸಬೇಕು, ಖ್ಯಾತ ಸಾಹಿತಿ ರಾಜರತ್ನಂ ಅವರ ಜೀವನವನ್ನು ತಿಳಿಸಿಕೊಡುವ ಉದೇಶದಿಂದ ಇಂಥ್ದದೊಂದು ಪ್ರಯತ್ನಕ್ಕೆ ಕೈಹಾಕಿದೆವು’ ಅಂತ ಮಾತು ಮುಂದುವರಿಸಿದರು ಲಕ್ಷ್ಮಿ ಚಂದ್ರಶೇಖರ್.

‘ಈ ಹೊಸ ಪ್ರಯತ್ನಕ್ಕಾಗಿ ಆರು ತಿಂಗಳ ಕಾಲ ತಾಲೀಮು ನಡೆಸ್ದಿದೆವು. ಪ್ರವಾಸಕ್ಕಾಗಿಯೇ ‘ನಾಟಕದ ಪರಿಕರಗಳನ್ನು’ ಸಿದ್ಧಗೊಳಿಸ್ದಿದೆವು. ಎಲವೂ ಫೋಲ್ಡಬಲ್ ಮತ್ತು ಪೋರ್ಟ್‌ಬಲ್. ವಸ್ತುಗಳಿಗೆ ತಕ್ಕಂತ ಪೆಟ್ಟಿಗೆಗಳು. ಇಷ್ಟ್ಲೆಲ ಇದರೂ ಪ್ರವಾಸದ್ಲಲ್ಲೆಲೂ ಒಂದಿಂಚೂ ಆಚೀಚೆಯಾಗಲ್ಲಿಲ’ ಎನ್ನುತ್ತ ಗೆಲುವಿನ ನಗೆಬೀರಿದರು ಲಕ್ಷ್ಮಿ ಮೇಡಮ್.

ನಾಲ್ಕು ಕಲಾವಿದರು ೨೫ ಪಾತ್ರಗಳು:

‘ರತ್ನನ್ ಪರಪಂಚ’ ನಾಟಕದ್ಲಲಿ ಒಟ್ಟು ಇಪ್ಪತ್ತೈದು ಪಾತ್ರಗಳು. ಇಷ್ಟೂ ಪಾತ್ರಗಳನ್ನು ನಾಲ್ಕು ಮಂದಿ ಅಭಿನಯಿಸ್ದಿದು ಈ ಪ್ರವಾಸ ವಿಶೇಷ. ‘ಸುಂದರ್ ನಾಲ್ಕೈದು ಪಾತ್ರ ಮಾಡಿದರು. ಒಂದೊಂದು ಪಾತ್ರ ಒಂದೂವರೆ ನಿಮಿಷದ್ಲಲಿ ವೇಷ-ಬಣ್ಣ ಬದಲಾಯಿಸಿಕೊಳ್ಳುತ್ತ್ದಿದರು. ನಿಜಕ್ಕೂ ಇದೊಂದು ಥ್ರಿಲ್’ ಲಕ್ಷ್ಮಿ ಮೇಡಮ್ ಮತ್ತೆ ಅನುಭವದ ನೆನಪಿಗೆ ಜಾರಿದರು.

‘ಎಲವೂ ಇದು ನಾಟಕ ಮಾಡೋದು ವಿಶೇಷವ್ಲಲ. ಗ್ರೀನ್ ರೂಮ್, ಸೈಡ್‌ವಿಂಗ್, ಲೈಟಿಂಗ್ ಹೀಗೆ.. ಯಾವ ವ್ಯವಸ್ಥೆಯೂ ಸರಿಯ್ಲಿಲದ ಪುಟ್ಟ ರಂಗ ಸಜ್ಜಿಕೆ ಮೇಲೆ ನಾಟಕ ಪ್ರದರ್ಶನ ನಿಜಕ್ಕೂ ಒಂದು ಸವಾಲು. ಇಂಥ ವಾತಾವರಣದ್ಲಲೇ ಹದಿನೈದು ಪ್ರದರ್ಶನಗಳನ್ನು ನೀಡ್ದಿದೇವೆ’ ಎನ್ನುವ ಕ್ರಿಯೇಟಿವ್ ತಂಡ್ದದು ಒಂದು ಮಟ್ಟಿಗೆ ‘ದೊಡ್ಡ ಸಾಧನೆಯೇ ಸರಿ’.

ವರ್ಷಗಳ ನಂತರ ನಕ್ಕ್ದಿದೇ ನಕ್ಕ್ದಿದು...!

ಕರ್ನಾಟಕದ್ಲಲಿ ೭೫ ಯಶಸ್ವಿ ಪ್ರದರ್ಶನಗಳನ್ನು ಕಂಡ ‘ಹೀಗಾದರೆ ಹೇಗೆ?’ ನಾಟಕ ನೋಡಿದವರು ಹೊಟ್ಟೆ ಹುಣ್ಣಾಗುವಷ್ಟು ನಕ್ಕ್ದಿದೇ ನಕ್ಕ್ದಿದು. ‘ಬಹಳ ವರ್ಷಗಳ ಮೇಲೆ ಹೀಗೆ ನಗುತ್ತ್ದಿದೇವೆ’ ಎಂದು ನಮ್ಮ ಪ್ರೇಕ್ಷಕರು ಉದ್ಗರಿಸ್ದಿದು ಪ್ರದರ್ಶನದ ಸಾರ್ಥಕತೆಗೆ ಹಿಡಿದ ಕನ್ನಡಿಯಾಗಿತ್ತು.

ವಿಶೇಷ ಅಂದ್ರೆ ಕನ್ನಡ ಅರ್ಥವಾಗದ ‘ಬಿಳಿಯ’ರೂ ಕೂಡ ಚಪ್ಪಾಳೆ ತಟ್ಟ್ದಿದು, ಅವರ ಮಕ್ಕಳು ಗಪ್‌ಚಿಪ್ ಆಗಿ ಕುಳಿತು ನಾಟಕ ನೋಡ್ದಿದು, ಇವ್ಲೆಲ ಮರೆಯಲಾಗದ ನೆನಪುಗಳು ಎಂದ ಮೇಡಮ್ ಮಾತಿಗೆ ಸುಂದರ್, ಗಜಾನನ, ರಾಮಕೃಷ್ಣ ಜೊತೆಯಾದರು.

ಶಹಬ್ಬಾಸ್, ಬನ್ನಿ ಮತ್ತೆ!

ನಾಟಕದ ಪಾತ್ರದಾರಿಗಳ ಪ್ರತಿಭೆ ಕಂಡ ಕೆಲವರು ‘ಆಸ್ಕರ್ ಪ್ರಶಸ್ತಿ ನೀಡಬೇಕಾದ ಪ್ರದರ್ಶನ’ ಎಂದು ಉದ್ಗರಿಸಿದರೆ, ಇನ್ನು ಕೆಲವರು ‘ನಾವು ಬೆಂಗಳೂರಿಗೆ ಬಂದಾಗ ಕನ್ನಡ ನಾಟಕಗಳನ್ನು ತಪ್ಪದೇ ನೋಡುತ್ತೇವೆ’ ಎಂದರು.

ಅನೇಕ ಕನ್ನಡ ಒಕ್ಕೂಟಗಳು ‘ಮತ್ತೆ ಬನ್ನಿ’ ಎಂದು ಆಹ್ವಾನ ನೀಡಿದವು. ಸ್ಥಳೀಯ ಕನ್ನಡ ಪತ್ರಿಕೆಗಳು ನಾಟಕಗಳ ಬಗ್ಗೆ ಪ್ರಶಂಸಾತ್ಮಕ ವಿಮರ್ಶೆ ಪ್ರಕಟಿಸಿದವು. ಅಷ್ಟರ ಮಟ್ಟಿಗೆ ನಮ್ಮ ನಾಟಕಗಳು ಅಲಿನ ಕನ್ನಡಿಗರ ಮೇಲೆ ಪರಿಣಾಮ ಬೀರಿದವು’ ಎಂದರು ಲಕ್ಷ್ಮಿ ಚಂದ್ರಶೇಖರ್.

No comments:

Post a Comment